
Product details
ಡಾ. ಬಸು ಬೇವಿನಗಿಡದ ಆವರ ಓಡಿಹೋದ ಹುಡುಗ' ಎನ್ನುವ ಕಾದಂಬರಿ ಮಕ್ಕಳ ಸಾಹಿತ್ಯ ಲೋಕದಲ್ಲಿ ತುಂಬ ಗಮನಾರ್ಹ ಕೃತಿಯಾಗಿದೆ, - ಬಸು ಬೇವಿನಗಿಡದ ಆವರು ನಾಡಿನ ಒಬ್ಬ ಮಹತ್ವದ ಕಥೆಗಾರ, ಕವಿ, ಅನುವಾದಕರಾಗಿದ್ದಾರೆ.
ಆಧುನೀಕರಣ ಹಾಗೂ ಜಾಗತೀಕರಣದ ನಡುವೆ ಕಳೆದು ಹೋಗುತ್ತಿರುವ ಇಂದಿನ ಮಕ್ಕಳಿಗೆ ಕೈಪಿಡಿಯಾಗಿದೆ. ಗಜ್ಯಾ ಎಂಬ ಪುಟ್ಟ ಹುಡುಗನ ಬದುಕಿನ ಸಂಘರ್ಷ, ಬದುಕಿಗಂಟಿದ ಬಡತನ, ಎಡತಾಕುವ ಸವಾಲುಗಳನ್ನು ಲೇಖಕ ಎಳೆಎಳೆಯಾಗಿ ಇಲ್ಲಿ ವಿವರಿಸಿದ್ದಾರೆ. ಕಾದಂಬರಿಯುದ್ದಕ್ಕೂ ಆಲದ ಮರದ ಅಜ್ಜನ ಪಾತ್ರ ಗಮನ ಸೆಳೆಯುತ್ತದೆ. ಹುಡುಗ ಮತ್ತು ನಗೆಕಾಟಕೆಗಳೊಂದಿಗೆ ಬಸು ಅವರು ಈ ಕೃತಿಯನ್ನು ರಚಿಸಿದ್ದಾರೆ. ಹಳ್ಳಿಯ ಕಾಲುದಾರಿಯಲ್ಲಿ ಅಡ್ಯಾಡಿ, ಜಿಗಿದಾಡಿ.ಓಡಾಡಿ, ಧೂಳು ಮತ್ತು ಶಿಸುವಿನಲ್ಲಿ ಕೊಳ್ಳಾಡಿ, ಹಳ್ಳಿಕೆರೆ-ಬಾವಿಗಳಲ್ಲಿ ಈಸಾಡಿ, ಸೈಕಲ್ ಸವಾರಿ ಮಾಡಿದ ಸಂಗತಿಗಳು ಈ ಕಾದಂಬರಿಯಲ್ಲಿ ಗ್ರಾಮೀಣ ಜನಜೀವನದ ಪ್ರತಿಬಿಂಬಗಳಾಗಿ ಮೂಡಿಬಂದಿವೆ
ಕಥೆ ಹೇಳುವ, ಅನುಭವ ಹಂಚಿಕೊಳ್ಳುವ, ಮಕ್ಕಳಿಗೆ ತಿಳಿ ಹೇಳುವ ಆತನ ಸಾಂಗತ್ಯ ಗಜ್ಯಾ ಮತ್ತು ಸಂಗಡಿಗರಿಗೆ ಅಪ್ಯಾಯಮಾನವಾಗಿದೆ. ವಿಭಿನ್ನ ಕಥಾ ಹಂದರವಿರುವ ಈ ಪುಸ್ತಕ ಸರಳ ಮತ್ತು ಸುಲಲಿತ ನಿರೂಪಣಾ ಶೈಲಿಯಿಂದಾಗಿ ಓದುಗರ ಗಮನ ಸೆಳೆದಿದೆ. ಮಕ್ಕಳ ಮಾನಸ ಲೋಕಕ್ಕೆ ತುಸು ಹತ್ತಿರವಾಗುವಂತಿದೆ. ಉತ್ತರ ಕರ್ನಾಟಕದ ಗ್ರಾಮೀಣ ಸೊಗಡು, ಭಾಷೆ, ಹಸರುಗಳಿಂದ ಕಾದಂಬರಿಗೆ ಮತ್ತಷ್ಟು ಸೊಗಸು ಸಿಕ್ಕಿದೆ.
Similar products