Product details
ಲೇಖಕಿ ವಿಜಯಶ್ರೀ ಹಾಲಾಡಿ ಅವರು ಮಕ್ಕಳಿಗಾಗಿ ಬರೆದ ಕಾದಂಬರಿ ’ಸೂರಕ್ಕಿಗೇಟ್’. ಮಕ್ಕಳ ಕುತೂಹಲ ಕೆರಳಿಸುವಂತಹ ಅನೇಕ ಪಾತ್ರಗಳು ಕೃತಿಯಲ್ಲಿವೆ.
ಈ ಕಾದಂಬರಿಯ ಬಗ್ಗೆ ಲೇಖಕರು ಹೀಗೆನ್ನುತ್ತಾರೆ: “ಸೂರಕ್ಕಿ ಗೇಟ್' ಎಂಬ ಈ ಕಾದಂಬರಿಯನ್ನು ಬರೆದೆ ಎಂದರೆ ಅದು ಅಪ್ರಮಾಣಿಕತೆಯಾಗುತ್ತದೆ, ಬರೆಯುತ್ತ ಬರೆಯುತ್ತ ಇಲ್ಲಿನ ಪಾತ್ರಗಳು, ಸನ್ನಿವೇಶಗಳು ಅವಾಗಿಯೇ ಬೆಳೆಯುತ್ತಾ ಹೋದವು, ನಮ್ಮ ಬೆಕ್ಕುಗಳು, ನಾಯಿಮರಿಯೇ ಇಲ್ಲಿರುವ ಬಹುತೇಕ ಜೀವಗಳು. ಅವುಗಳಿರದಿದ್ದರೆ ನನ್ನ ಬರಹ ಎಲ್ಲಿರುತ್ತಿತ್ತು? ನಮೂರು ಹಾಲಾಡಿ ಗ್ರಾಮದ ಪುಟ್ಟ ಹಳ್ಳಿ ಮುದೂರಿಯ ನಿಸರ್ಗದಲ್ಲಿ ಬೆಳೆಯುತ್ತ ಬಾಲ್ಯದಲ್ಲಿ ಕಂಡದ್ದು, ಅನುಭವಿಸಿದ್ದೆಲ್ಲ ನನ್ನೊಳಗೆ ಸೇರಿಹೋಗಿದೆ. ಅಲ್ಲಿನ ಜನಜೀವನಕ್ಕೆ, ನಿಸರ್ಗಕ್ಕೆ ಅಪಾರ ಶಕ್ತಿ ಇದೆ, ಬರೆಸಿಕೊಳ್ಳುವ ತಾಕತ್ತಿದೆ. ನಾನು ಕಂಡುಕೊಂಡ ಇನ್ನೊಂದು ಸತ್ಯವೆಂದರೆ ಮಕ್ಕಳಿಗಾಗಿ ಏನಾದರೂ ಬರೆಯುವುದು ಅಷ್ಟು ಸುಲಭದ ಮಾತಲ್ಲ. ಬರೆಯುವವರ ಮೈಮನಸ್ಸು ಮಗುವಾದಾಗ ಮಾತ್ರ ಒಂದೊಳ್ಳೆಯ ಪದ್ಯವೋ, ಗದ್ಯವೋ ಮೂಡಲು ಸಾಧ್ಯ. ಅಂತಹ ಸಂದರ್ಭಗಳು ನನ್ನ ಬದುಕಲ್ಲಿ ದಿನವೂ ಬರಲೆಂಬ ಆಶಯ ನನ್ನದು.
Similar products